






ಸಕಲೇಶಪುರ:- ತಾಲ್ಲೂಕಿನ ಮಹಿಳಾ ಜಾಗೃತಿ ಮಾರ್ಗದರ್ಶಿ ಅಸೋಸಿಯೇಶನ್ (ರಿ)ವತಿಯಿಂದ 19ನೇ ವರ್ಷದ ವಾರ್ಷಿಕೋತ್ಸವ ಹಾಗೂ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಇಂದು ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿರುವ ಭೀಮ ಮಂದಿರದಲ್ಲಿ ಡಾಕ್ಟರ್ ಆಲಿಯಾ ಭಾನು ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಮಹಿಳಾ ಜಾಗೃತಿ ಮಾರ್ಗದರ್ಶಿ ಅಸೋಸಿಯೇಶನ್ (ರಿ) ಅಧ್ಯಕ್ಷರಾದ ಕಲ್ಪನಾ ಕೀರ್ತಿ, ಮಹಿಳಾ ಪೊಲೀಸ್ ಪೇದೆ ಸುಜಾತಾ,
ಉಪಾಧ್ಯಕ್ಷರಾದ ಕಾವ್ಯ ಕೆಸಗನಹಳ್ಳಿ, ಕಾರ್ಯದರ್ಶಿ ಪ್ರಮೀಳಾ ಹೆತ್ತೂರು ಸೇರಿದಂತೆ ನಿರ್ದೇಶಕರು ಸೇರಿದಂತೆ ಇನ್ನು ಮುಂತಾದವರು ಉಪಸ್ಥಿತರಿದ್ದರು.