
ಸಕಲೇಶಪುರ :- ಬೇಲೂರಿನ ಸೀನಿಯರ್ ಸಿವಿಲ್ ಜಡ್ಜ್ ನ್ಯಾಯಾಧೀಶರ ಆದೇಶದ ಮೇರೆಗೆ ಇಂದು ಸಕಲೇಶಪುರದ ಉಪ ವಿಭಾಗಾದಿಕಾರಿಗಳ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಲಾಯಿತು. ಲ್ಯಾಂಡ್ ಅಕ್ವಿಜಿಶನ್ ಕೇಸ್ ನಲ್ಲಿ ಸರ್ಕಾರಕ್ಕೆ ಸ್ವಾಧೀನ ಪಡಿಸಿಕೊಂಡ ಭೂಮಿಗೆ ನೀಡಬೇಕಾದ ಪರಿಹಾರ ಮೊತ್ತವನ್ನು ನಿಡುವಲ್ಲಿ ವಿಳಂಭ ಆಗಿರುವುದಕ್ಕೆ ದಕ್ಷ ನ್ಯಾಯಾಧೀಶರಾದ ಎಂ.ಎಸ್. ಶಶಿಕಲಾ ಅವರ ಆದೇಶದ ಮೇರೆಗೆ ಇಂದು ಉಪವಿಭಾಗಾಧಿಕಾರಿಯ ಕಚೇರಿಯನ್ನು ಜಪ್ತಿ ಮಾಡಲಾಯಿತು. ಜಾರಿ ನಿರ್ದೇಶನಾಲಯದ ಆದೇಶದ ಮೇರೆಗೆ ಇಂದು ಕೋರ್ಟ್ ಜಪ್ತಿ ಅಧಿಕಾರಿಗಳಾದ ಕೃಷ್ಣ.ಎನ್. ಹಾಗೂ ಆದೇಶ ಜಾರಿಕಾರರಾದ ಚೌಡಪ್ಪನವರ ಸಮ್ಮುಖದಲ್ಲಿ ಕಚೇರಿಯ ಪಿಟೋಪಕರಣಗಳು ಹಾಗೂ ಕಂಪ್ಯೂಟರ್, ಬ್ಯಾಟರಿಗನ್ನು ಹಾಗೂ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಲಾಯಿತು.