ಹಾಸನ : ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ದೊಡ್ಡ ಕೆರೆಯಲ್ಲಿ ಭಾನುವಾರ ಕಾಲು ಜಾರಿ ನೀರಿಗೆ ಬಿದ್ದು ಬಾಲಕ ಅಭಿಷೇಕ್ (13) ಮೃತಪಟ್ಟಿದ್ದಾನೆ ಇಲ್ಲಿನ ಅಂಗಡಿಬೀದಿ ನಿವಾಸಿಗಳಾದ ಮಹದೇವ್ ಮತ್ತು ಜ್ಯೋತಿ ದಂಪತಿಯ ದ್ವಿತೀಯ ಪುತ್ರ. ಮಧ್ಯಾಹ್ನ ದನಗಳಿಗೆ ನೀರು ಕುಡಿಸುವಾಗ ಕಾಲು ಜಾರಿ ನೀರಿಗೆ ಬಿದ್ದು ಸಾವು ಸಂಭವಿಸಿದೆ ಎಂದು ತಂದೆ ಹಿರೀಸಾವೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಪ್ರಕರಣ ದಾಖಲಾಗಿದೆ.